ಕಾವೇರಿ ಮಧ್ಯಂತರ ತೀರ್ಪಿನ ಚೌಕಟ್ಟಿನಲ್ಲಿ ಚರ್ಚೆ: ಕರುಣಾನಿಧಿ
ತಿರುಚಿನಾಪಳ್ಳಿ, ಸೆ.2 (ಯುಎನ್ಐ, ಪಿಟಿಐ)– ಕಾವೇರಿ ಜಲವಿವಾದದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರೊಂದಿಗೆ ನಡೆಯುತ್ತಿರುವ ಸಂಧಾನ ಮಾತುಕತೆಗಳು ನ್ಯಾಯ ಮಂಡಳಿಯ ಮಧ್ಯಂತರ ತೀರ್ಪಿನ ಚೌಕಟ್ಟಿನಲ್ಲೇ ನಡೆಯುವುದು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಇಂದು ಇಲ್ಲಿ ಪುನರುಚ್ಚರಿಸಿದರು.