ಆಲಮಟ್ಟಿ ಅಣೆ ನಿರ್ಮಾಣ ಕಾಮಗಾರಿ ನಿಲ್ಲದು
ಬೆಂಗಳೂರು, ಮಾರ್ಚ್ 21– ಆಲಮಟ್ಟಿ ಅಣೆ ಕಟ್ಟೆ ನಿರ್ಮಾಣ ಕಾರ್ಯಕ್ಕೆ ಆಂಧ್ರಪ್ರದೇಶವಾಗಲೀ ಅಥವಾ ಯಾರೇ ಆಗಲಿ ಅಡಚಣೆ ಉಂಟು ಮಾಡುವುದನ್ನು ಸಹಿಸುವುದಿಲ್ಲ. ನಿಯೋಜಿಸಿರುವಂತೆ ಕೈಗೊಂಡಿರುವ ಅಣೆಕಟ್ಟಿನ ಕಾಮಗಾರಿಗಳನ್ನು ಯಾವುದೇ ಕಾರಣದಿಂದ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸುವ ನಿರ್ಣಯವನ್ನು ಇಂದು ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಮಂಡಿಸಿದ ನಿರ್ಣಯಕ್ಕೆ ಪಕ್ಷಬೇಧವಿಲ್ಲದೆ ಎಲ್ಲರ ಒಪ್ಪಿಗೆ ದೊರೆಯಿತು.