‘ಧರ್ಮಕಾರಣ ಮುಟ್ಟುಗೋಲು’
ಬೆಂಗಳೂರು, ಮಾ.26– ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದ್ದ ಡಾ.ಪಿ.ವಿ.ನಾರಾಯಣ ಅವರು ಬರೆದಿರುವ ‘ಧರ್ಮಕಾರಣ’ ಕಾದಂಬರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅವರು ಇಂದು ವಿಧಾನಮಂಡಲದ ಉಭಯಸದನಗಳಲ್ಲಿ ಪ್ರಕಟಿಸಿದರು.