ನವದೆಹಲಿ, ಸೆ. 9 (ಪಿಟಿಐ): ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವೆ ಜಯಂತಿ ನಟರಾಜನ್, ತಮಿಳು ಮಾನಿಲ ಪಕ್ಷದ ಅಧ್ಯಕ್ಷ ಜಿ.ಕೆ. ಮೂಪನಾರ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪೀಟರ್
ಆಲ್ಫೊನ್ಸೆ ಅವರು ತಮ್ಮ ರಾಜ್ಯಸಭಾ ಸ್ಥಾನಗಳಿಗೆ ‘ತಾಂತ್ರಿಕ ಕಾರಣ’ದ ಹಿನ್ನೆಲೆಯಲ್ಲಿ
ನೀಡಿದ್ದ ರಾಜೀನಾಮೆಯನ್ನು ರಾಜ್ಯಸಭೆಯ ಸಭಾಪತಿ ಕೃಷ್ಣಕಾಂತ್ ಇಂದು ಅಂಗೀಕರಿಸಿದರು.