ಬೆಂಗಳೂರು, ನ. 21– ರಾಜ್ಯದ ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗದವರ ಕುಂದು ಕೊರತೆಗಳ ಪರಿಶೀಲನೆಗೆ ಆಂಧ್ರ ಮತ್ತು ತಮಿಳುನಾಡಿದ ಮಾದರಿಯಲ್ಲಿ ಆಯೋಗವೊಂದನ್ನು ರಚಿಸಬೇಕು ಎಂದು ಈ ವರ್ಗದ ರಾಜ್ಯಮಟ್ಟದ ಸಮ್ಮೇಳನವು ಸರ್ಕಾರವನ್ನು ಒತ್ತಾಯಪಡಿಸಿದೆ.
ಬೆಳಿಗ್ಗೆ ಪುರಭವನದಲ್ಲಿ ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯಪಾಲ ಧರ್ಮವೀರ ಅವರು ಆಯೋಗ ರಚನೆಯ ಸೂಚನೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಲೀಟರ್ ಹಾಲಿಗೆ 7 ರೂಪಾಯಿ!
ಹುಬ್ಬಳ್ಳಿ, ನ. 21– ಹುಬ್ಬಳ್ಳಿಯಲ್ಲಿ ನಿನ್ನೆ ಒಂದು ಲೀಟರ್ ಹಾಲಿಗೆ ಏಳು ರೂಪಾಯಿಗಳಂತೆ ಮಾರಾಟವಾಯಿತು.
ಬೆಲೆ ಎಷ್ಟು ಏರಿದ್ದರೂ ಹೇಗಾದರೂ ಮಾಡಿ ಕಾಲು ಸೇರು ಹಾಲು ಪಡೆಯ ಬೇಕೆಂಬ ಇಚ್ಛೆಯಿಂದ ಜನರು ಹಾಲಿನ ಅಂಗಡಿಗಳ ಬಳಿ ಸಾಲುಕಟ್ಟಿ ನಿಂತಿದ್ದುದು ಕಂಡುಬಂತು.