ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಸೋಮವಾರ 22–11–1971

Last Updated 21 ನವೆಂಬರ್ 2021, 18:30 IST
ಅಕ್ಷರ ಗಾತ್ರ

ಹಿಂದುಳಿದವರ ಕೊರತೆ ಪರಿಶೀಲನೆಗೆ ಆಯೋಗ ರಚಿಸಲು ಒತ್ತಾಯ

ಬೆಂಗಳೂರು, ನ. 21– ರಾಜ್ಯದ ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗದವರ ಕುಂದು ಕೊರತೆಗಳ ಪರಿಶೀಲನೆಗೆ ಆಂಧ್ರ ಮತ್ತು ತಮಿಳುನಾಡಿದ ಮಾದರಿಯಲ್ಲಿ ಆಯೋಗವೊಂದನ್ನು ರಚಿಸಬೇಕು ಎಂದು ಈ ವರ್ಗದ ರಾಜ್ಯಮಟ್ಟದ ಸಮ್ಮೇಳನವು ಸರ್ಕಾರವನ್ನು ಒತ್ತಾಯಪಡಿಸಿದೆ.

ಬೆಳಿಗ್ಗೆ ಪುರಭವನದಲ್ಲಿ ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯಪಾಲ ಧರ್ಮವೀರ ಅವರು ಆಯೋಗ ರಚನೆಯ ಸೂಚನೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಲೀಟರ್‌ ಹಾಲಿಗೆ 7 ರೂಪಾಯಿ!

ಹುಬ್ಬಳ್ಳಿ, ನ. 21– ಹುಬ್ಬಳ್ಳಿಯಲ್ಲಿ ನಿನ್ನೆ ಒಂದು ಲೀಟರ್ ಹಾಲಿಗೆ ಏಳು ರೂಪಾಯಿಗಳಂತೆ ಮಾರಾಟವಾಯಿತು.

ಬೆಲೆ ಎಷ್ಟು ಏರಿದ್ದರೂ ಹೇಗಾದರೂ ಮಾಡಿ ಕಾಲು ಸೇರು ಹಾಲು ಪಡೆಯ
ಬೇಕೆಂಬ ಇಚ್ಛೆಯಿಂದ ಜನರು ಹಾಲಿನ ಅಂಗಡಿಗಳ ಬಳಿ ಸಾಲುಕಟ್ಟಿ ನಿಂತಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT