ನಂದಿ ಬೆಟ್ಟದ ಬಳಿಯ ಪಕ್ಷಿ ಬಾಬಾ ಆಶ್ರಮದಲ್ಲಿ ಬರೇ ಹಣ್ಣು ಹಂಪಲುಗಳನ್ನು ಸೇವಿಸಿ, ದಿನವೂ ಆರೇಳು ಮೈಲಿ ದೂರ ನಡೆದು ವ್ಯಾಯಾಮ ಪಡೆದುಕೊಂಡು, ಗೀತ ಪಠಣ, ಪತ್ರಿಕೆ ವಾಚನಗಳಲ್ಲಿ ದಿನಗಳೆಯುತ್ತಿ ರುವ ಕೆಂಗಲ್ ಅವರು ಆರೋಗ್ಯದಲ್ಲಿ ಅತ್ಯುತ್ತಮವಾಗಿದ್ದಾರೆ. ಸ್ವಲ್ಪ ಗಡ್ಡವನ್ನೂ ಬಿಟ್ಟಿದ್ದಾರೆ ಎಂದು ಇಂದು ಅವರನ್ನು ಭೇಟಿ ಮಾಡಿಕೊಂಡು ಬಂದ ಮಾಜಿ ಮೇಯರ್ ಜೆ. ಲಿಂಗಯ್ಯ ಅವರು ಮಧ್ಯಾಹ್ನ ‘ಪ್ರಜಾವಾಣಿ’ಗೆ ಟೆಲಿಫೋನ್ ಮಾಡಿ ತಿಳಿಸಿದರು.