ಹೈದರಾಬಾದ್, ಜ. 2– ಪ್ರತ್ಯೇಕ ಆಂಧ್ರ ಚಳವಳಿಗಾರರ ಉದ್ರಿಕ್ತ ಗುಂಪನ್ನು ಚದುರಿ ಸಲು 3 ಊರುಗಳಲ್ಲಿ– ನೆಲ್ಲೂರು, ಅನಂತಪುರ ಮತ್ತು ಮಚಲಿಪಟ್ಟಣ ಸಮೀಪದ ನಗಯಲಂಕಗಳಲ್ಲಿ ಐದು ಬಾರಿ ಪೊಲೀಸರು ಗುಂಡು ಹಾರಿಸಿದಾಗ ಮೂವರು ಮೃತಪಟ್ಟು, ಹಲವರು ಗಾಯಗೊಂಡರು. ಆಂಧ್ರ ವಲಯದ 12 ಜಿಲ್ಲೆಗಳಲ್ಲೂ ಇಂದು ಸಂಪೂರ್ಣ ಬಂದ್ ಆಚರಿಸಲಾಯಿತು.