ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶುಕ್ರವಾರ, 5–1–1973

Last Updated 4 ಜನವರಿ 2023, 19:45 IST
ಅಕ್ಷರ ಗಾತ್ರ

ತ್ವರಿತವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಕಾಲುವೆ ಕಾರ್ಯ ಆರಂಭ

ಬೆಂಗಳೂರು, ಜನವರಿ 4– ಕಲ್ಬುರ್ಗಿ, ಬಿಜಾಪುರ ಜಿಲ್ಲೆಗಳ ಜನತೆಯನ್ನು ತೀವ್ರವಾಗಿ ಕಾಡುತ್ತಿರುವ ಕ್ಷಾಮವು ದುಸಾಧ್ಯ ಸಂಕಷ್ಟ ತಂದರೂ, ಪರೋಕ್ಷವಾಗಿ ಅವರ ಬಹುಕಾಲದ ಬೇಡಿಕೆಯೊಂದನ್ನು ಈಡೇರಿಸಲು ತ್ವರಿತ ಗಮನ ನೀಡಲು ಕಾರಣವಾಗಿದೆ.

ಬರಗಾಲ ಪೀಡಿತ ಜನರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಕೃಷ್ಣಾ ಮೇಲ್ದಂಡೆ ಕಾಲುವೆ ಕೆಲಸವನ್ನು ತ್ವರಿತವಾಗಿ ಪ್ರಾರಂಭಿಸಲು ನಿರ್ಧರಿಸಿದೆ.

‘ಸುಯೋಗ, ದೊಡ್ಡ ಗೌರವ’: ಹೊಸ ದಂಡನಾಯಕ ಬೇವೂರ್‌ ಪ್ರತಿಕ್ರಿಯೆ

ಪುಣೆ, ಜನವರಿ 4– ‘ಈ ಹುದ್ದೆಗೆ ನಾನು ಆಯ್ಕೆಯಾಗಿರುವುದು ನನ್ನ ಸುಯೋಗ. ನನಗೆ ದೊರೆತಿರುವ ದೊಡ್ಡ ಗೌರವ’.

–ಭೂಸೇನೆಯ ಪ್ರಧಾನ ದಂಡನಾಯಕರಾಗಿ ನೇಮಕಗೊಂಡಿರುವ ಪೂರ್ವವಲಯದ ದಂಡನಾಯಕ ಲೆಫ್ಟಿನೆಂಟ್‌ ಜನರಲ್‌ ಬೇವೂರ್‌ ಅವರನ್ನು ಸುದ್ದಿಗಾರರು ಅಭಿನಂದಿಸಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT