ಔರಂಗಾಬಾದ್, ಜನವರಿ 7– ಅಭಾವ ಪರಿಹಾರ ಕಾಮಗಾರಿ ಯಾಗಿ ಕೊಂಕಣ ರೈಲ್ವೆ ಯೋಜನೆ ಆರಂಭಿಸುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಅಭಾವ ಪ್ರದೇಶಗಳಿಗೆ ಹೆಲಿಕಾಪ್ಟ ರಿನಲ್ಲಿ ಸಂಚರಿಸಿ ಕ್ಷಿಪ್ರ ಭೇಟಿ ನೀಡಿದ ಸಂದರ್ಭದಲ್ಲಿ 2,000 ಜನ ಸಂಖ್ಯೆಯ ಆಚೆಗಾವ್ನಲ್ಲಿ ಐದು ಮಿನಿಟುಗಳ ಭಾಷಣ ಮಾಡಿದಾಗಲೂ ರೈಲ್ವೆ ಕಾಮಗಾರಿ ವಿಚಾರ ತಿಳಿಸಿದರು.