ಆಂಧ್ರ ಮುಖ್ಯಮಂತ್ರಿಗೆ ದೆಹಲಿ ತುರ್ತು ಕರೆ; ರಾಷ್ಟ್ರಪತಿ ಆಳ್ವಿಕೆ ಖಚಿತ
ನವದೆಹಲಿ, ಜ. 16– ತೀವ್ರ ತೊಂದರೆಗೆ ಗುರಿಯಾಗಿರುವ ಆಂಧ್ರಪ್ರದೇಶವನ್ನು ಸ್ವಲ್ಪಕಾಲದವರೆಗಾದರೂ ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಬೇಕೆಂಬ ನಿರ್ಧಾರವನ್ನು ಇಂದು ಬೆಳಿಗ್ಗೆ ಇಲ್ಲಿ ಸಂಪುಟದ ರಾಜಕೀಯ ವ್ಯವಹಾರ ಸಮಿತಿ ಸಭೆಯಲ್ಲಿ ಎರಡು ಗಂಟೆಗಳ ದೀರ್ಘ ಚರ್ಚೆ ನಂತರ ಕೈಗೊಳ್ಳಲಾಯಿತೆಂದು ತಿಳಿದುಬಂದಿದೆ.