ನವದೆಹಲಿ, ಫೆ. 4– ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಇಂದು ಕೇಂದ್ರ ಸಂಪುಟದಲ್ಲಿ ಬದಲಾವಣೆಗಳನ್ನು ಪ್ರಕಟಿಸಿದರು. ಕೆಲವರು ಹೊಸ ಸಚಿವರ ನೇಮಕದ ಜೊತೆಗೆ ಟಿ.ಎ. ಪೈ, ಉಮಾಶಂಕರ ದೀಕ್ಷಿತ್ ಮತ್ತು ಎಲ್.ಎನ್. ಮಿಶ್ರಾ ಅವರುಗಳ ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದೆ.
ರೈಲ್ವೆ ಸಚಿವ ತೋನ್ಸೆ ಅನಂತ ಪೈ ಅವರಿಗೆ ಹೆವಿ ಎಂಜಿನಿಯರಿಂಗ್ ಖಾತೆಯನ್ನು ವಹಿಸಿಕೊಡಲಾಗಿದೆ. ಎಲ್.ಎನ್. ಮಿಶ್ರಾ ಅವರಿಗೆ ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಿ ರೈಲ್ವೆ ಸಚಿವರನ್ನಾಗಿ ನೇಮಿಸಲಾಗಿದೆ.