ಉಪಖಂಡ ರಾಷ್ಟ್ರಗಳಿಗೆ ಮಾರಕಾಸ್ತ್ರ ಕಳಿಸದಿರಲು ಅಮೆರಿಕ ನಿರ್ಧಾರ
ನವದೆಹಲಿ, ಮಾರ್ಚ್ 15– ಭಾರತ ಉಪಖಂಡದ ಯಾವ ರಾಷ್ಟ್ರಕ್ಕೂ ಮಾರಕಾಸ್ತ್ರಗಳನ್ನು ಇನ್ನು ಮುಂದೆ ಸರಬರಾಜು ಮಾಡಬಾರದೆಂದು ತಮ್ಮ ಸರ್ಕಾರ ‘ಆತ್ಮಸಾಕ್ಷಿಯ ನಿರ್ಧಾರ’ ಕೈಗೊಂಡಿದೆ ಎಂದು ಅಮೆರಿಕದ ಹೊಸ ರಾಯಭಾರಿ ಡೇನಿಯಲ್ ಪ್ಯಾಟ್ರಿಕ್ ಮೊಯ್ನಿಹಾನ್ ಅವರು ಪ್ರಧಾನಿ ಇಂದಿರಾ ಅವರಿಗೆ ಇಂದು ತಿಳಿಸಿದರು.