ಬೆಂಗಳೂರು, ಮಾರ್ಚ್ 30– ದಿನಬಳಕೆ ವಸ್ತುಗಳ ವ್ಯಾಪಾರ ಮತ್ತು ಹಂಚಿಕೆಯಲ್ಲಿ ವ್ಯಾಪಾರಿಗಳಿಂದ ಬಳಕೆದಾರರ ಶೋಷಣೆ ತಪ್ಪಿಸಲು ಈ ಕ್ಷೇತ್ರದಲ್ಲಿ ಸರ್ಕಾರೀಕರಣ ಮತ್ತು ಸರ್ಕಾರಿ ಹಂಚಿಕೆಯನ್ನು ಗಣನೀಯವಾಗಿ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.