ರಾಷ್ಟ್ರಪತಿ ಗಿರಿಯವರು ಚಕ್ರವರ್ತಿ ಹೈಲಿ ಸಲಾಸಿಯವರ ಜೊತೆ ಇಂದು ಮಾತುಕತೆ ನಡೆಸಿದಾಗ ಈ ಮನವಿ ಮಾಡಿದರೆಂದು ವರದಿಯಾಗಿದೆ. ಪ್ರತೀ ರಾಷ್ಟ್ರಕ್ಕೂ ವಿದೇಶಿಯರ ಬಗ್ಗೆ ತನ್ನದೇ ಆದ ರೀತಿಯಲ್ಲಿ ವರ್ತಿಸುವ ಹಕ್ಕಿದೆ ಎಂದು ಚಕ್ರವರ್ತಿಯವರಿಗೆ ತಿಳಿಸಿದ ಗಿರಿಯವರು, ಉಗಾಂಡದಲ್ಲಿನ ಏಷ್ಯನ್ನರ ಬಗ್ಗೆ ಮಾನವೀಯ ವರ್ತನೆ ಅಗತ್ಯ. ಏಷ್ಯನ್ನರು ಘನತೆ, ಗೌರವಗಳಿಂದ ಉಗಾಂಡ ತ್ಯಜಿಸಲು ಅವಕಾಶ ಮಾಡಿಕೊಡಬೇಕೆಂದು ಹೇಳಿದರೆಂದು ತಿಳಿದುಬಂದಿದೆ.