ರಾಜ್ಯ ಆಡಳಿತ ಕಾಂಗ್ರೆಸ್ ಹೊಸ ಸಮಿತಿ: ಸರ್ವ ಸಮ್ಮತ ಹೆಸರುಗಳ ಸೂಚನೆಗೆ ಆದೇಶ
ನವದೆಹಲಿ, ಜೂನ್ 26– ರಾಜ್ಯದ ಪ್ರದೇಶ ಕಾಂಗ್ರೆಸ್ ಕಾರ್ಯ ನಿರ್ವಾಹಕ ಸಮಿತಿ ಮತ್ತು ಪ್ರದೇಶ ಚುನಾವಣೆ ಸಮಿತಿಗೆ ನೇಮಿಸಲು ಸರ್ವಸಮ್ಮತ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸುವಂತೆ ಆಡಳಿತ ಕಾಂಗ್ರೆಸ್ ಹೈಕಮಾಂಡ್ ಮೈಸೂರಿನ ಆಡಳಿತ ಕಾಂಗ್ರೆಸ್ ನಾಯಕರುಗಳಿಗೆ ಸಲಹೆ ಮಾಡಿದೆ.
ಮುಂಬರಲಿರುವ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಪಕ್ಷವನ್ನು ಬಲಗೊಳಿಸುವ ವಿಚಾರ ಚರ್ಚಿಸಲು ಆಡಳಿತ ಕಾಂಗ್ರೆಸ್ ಹೈಕಮಾಂಡ್ ಮೈಸೂರು ಪ್ರದೇಶ ಆಡಳಿತ ಕಾಂಗ್ರೆಸ್ ಅಡ್ಹಾಕ್ ಸಮಿತಿ ಸಂಚಾಲಯ ದೇವರಾಜ ಅರಸು ಮತ್ತು ಶಾಸಕ ಪಕ್ಷದ ನಾಯಕ ಎಚ್. ಸಿದ್ದವೀರಪ್ಪನವರನ್ನು ದೆಹಲಿಗೆ ಕರೆಸಿಕೊಂಡಿದೆ.