ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಧಿಕಾರ ಮೀರಿ ಹಸ್ತಕ್ಷೇಪ: ಸಚಿವರ ವಿರುದ್ಧ ಆಪಾದನೆ
ಬೆಂಗಳೂರು, ಮೇ 30– ಕೃಷಿ ಸಚಿವ ಶ್ರೀ ಕೆ.ಎಚ್.ಪಾಟೀಲ್ ಅವರು ಹೆಬ್ಬಾಳಿನ ಕೃಷಿ ವಿಶ್ವವಿದ್ಯಾನಿಲಯದ ವ್ಯವಹಾರದಲ್ಲಿ ತಮಗಿರುವ ಅಧಿಕಾರವನ್ನು ಮೀರಿ ಹಸ್ತಕ್ಷೇಪ ನಡೆಸಿದ್ದಾರೆಂದು ವಿಧಾನಪರಿಷತ್ತಿನಲ್ಲಿ ಇಂದು ಪಕ್ಷೇತರ ಸದಸ್ಯ ಶ್ರೀ ಎಂ.ಸತ್ಯನಾರಾಯಣರಾವ್ ಅವರು ಆಪಾದಿಸಿದರು.
ಮೈಸೂರು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳ ವಿಧೇಯಕದ ಪರಿಶೀಲನೆಗೆ ಸಂಯುಕ್ತ ಪರಿಶೀಲಕ ಸಮಿತಿ ರಚಿಸುವುದಕ್ಕೆ ಒಪ್ಪಿಗೆ ಸೂಚಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.