ಗಡಿ ಪ್ರಶ್ನೆ: ಪ್ರಧಾನಿ ನಿರ್ಧಾರ ಇನ್ನೂ ಅನಿಶ್ಚಿತ
ನವದೆಹಲಿ, ನ. 28–ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಕುರಿತ ಮಹಾಜನ್ ಆಯೊಗದ ವರದಿ ಬಗ್ಗೆ ಪ್ರಧಾನಿ ಇಂದಿರಾ ಗಾಂಧಿಯವರು ಇನ್ನೂ ಯಾವ ನಿರ್ಧಾರಕ್ಕೂ ಬಂದಿಲ್ಲ ಎಂಬುದು ಅವರ ಜತೆ ಇಂದು ಸಂಜೆ ಇಪ್ಪತ್ತೈದು ನಿಮಿಷ ಮಾತುಕತೆ ನಡೆಸಿದ ಮೈಸೂರು ಮುಖ್ಯಮಂತ್ರಿ ಶ್ರೀವೀರೇಂದ್ರ ಪಾಟೀಲರ ಅಭಿಪ್ರಾಯ.