ರಾಜಸ್ತಾನದಲ್ಲಿ ಉದ್ರಿಕ್ತ ಕಾರ್ಮಿಕರ ಮೇಲೆ ಗುಂಡು 7 ಜನರ ಸಾವು
ಜೈಪುರ, ಫೆ. 24–ಕೋಟಾದಲ್ಲಿ ಇಂದು ಬೆಳಿಗ್ಗೆ ಜೆ.ಕೆ. ಸಿಂಥಟಿಕ್ ಖಾಸಗಿ ಕಾರ್ಖಾನೆಯ ಉದ್ರಿಕ್ತ ಕಾರ್ಮಿಕರನ್ನು ಚದುರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಏಳು ಮಂದಿ ಮರಣ ಹೊಂದಿದರು. ಕಾರ್ಮಿಕ ಸಂಘದ ಹೇಳಿಕೆ ಪ್ರಕಾರ 13 ಮಂದಿ ಕಾರ್ಮಿಕರು ಮರಣ ಹೊಂದಿದ್ದಾರೆಂದು ತಿಳಿದುಬಂದಿದೆ.
ಕಲ್ಲೇಟಿನಿಂದ ಸರೋಜಿನಿ ಮಹಿಷಿ ತಲೆಗೆ ಪೆಟ್ಟು
ಧಾರವಾಡ, ಫೆ. 24–ಚುನಾವಣೆ ಭಾಷಣವೊಂದನ್ನು ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ಕೇಂದ್ರ ಉಪ ಸಚಿವೆ ಡಾ.ಸರೋಜಿನಿ ಮಹಿಷಿ ಅವರತ್ತ ಇಂದು ತೂರಲಾದ ಕಲ್ಲು ಬಂದು ಅವರ ತಲೆಗೆ ಪೆಟ್ಟಾಗಿದೆ. ಕಲ್ಲೇಟಿನಿಂದ ಇನ್ನೈವರು ಆಡಳಿತ ಕಾಂಗ್ರೆಸ್ ಕಾರ್ಯಕರ್ತರಿಗೂ ಗಾಯಗಳಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.