ಢಾಕಾ, ಕಲ್ಕತ್ತದಿಂದ ಭಾರತ–ಪಾಕಿಸ್ತಾನ ಪ್ರತಿನಿಧಿಗಳ ವಾಪಸು
ನವದೆಹಲಿ, ಏ. 24– ಕಲ್ಕತ್ತೆಯಲ್ಲಿರುವ ತನ್ನ ಸಹಾಯಕ ಹೈಕಮೀಷನರ್ ಕಚೇರಿಯನ್ನು ಮು್ಚಲು ನಿರ್ಧರಿಸಿರುವುದಾಗಿ ಪಾಕಿಸ್ತಾನವು ಭಾರತಕ್ಕೆ ಇಂದು ತಿಳಿಸಿತಲ್ಲದೆ ಢಾಕಾದಲ್ಲಿರುವ ಭಾರತದ ಸಹಾಯಕ ಹೈಕಮೀಷನರ್ ಕಚೇರಿಯನ್ನು ಬಂದ್ ಮಾಡುವಂತೆ ದೆಹಲಿಗೆ ಸೂಚಿಸಿತು.
ಪಾಕಿಸ್ತಾನದ ಹೈಕಮೀಷನರ್ರಾದ ಸಜ್ಜದ್ ಹೈದರ್ರವರು ಪಾಕಿಸ್ತಾನದ ನಿರ್ಧಾರವನ್ನು ಇಂದು ಅಧಿಕೃತವಾಗಿ ಭಾರತಕ್ಕೆ ತಿಳಿಯಪಡಿಸಿದರು.
ಈ ಮಧ್ಯೆ ಪಾಕಿಸ್ತಾನದಲ್ಲಿ ಭಾರತದ ಹೈಕಮೀಷನರ್ರಾದ ಬಿ.ಕೆ. ಆಚಾರ್ಯರವರು ಹಠಾತ್ತನೆ ನವದೆಹಲಿಗೆ ಬಂದಿದ್ದಾರೆ. ಪೂರ್ವಬಂಗಾಳದ ಘಟನೆಗಳ ಹಿನ್ನೆಲೆಯಲ್ಲಿ ಭಾರತ–ಪಾಕಿಸ್ತಾನ ನಡುವಣ ಬಾಂಧವ್ಯದ ಸಂಪೂರ್ಣ ವಿಮರ್ಶೇ ಅವರ ಈ ಭಟಿಯ ಮುಖ್ಯ ಉದ್ದೇಶವೆಂದು ಹೇಳಲಾಗಿದೆ. ಕಲ್ಕತ್ತೆಯಲ್ಲಿರುವ ಸಹಾಯಕ ಹೈಕಮೀಷನರ್ ಕಚೇರಿಯನ್ನು ಮುಚ್ಚಲು ಪಾಕಿಸ್ತಾನ ಸರ್ಕಾರ ನಿರ್ಧಾರ ಕೈಗೊಳ್ಳುವುದಕ್ಕೆ ಮುಂಚೆ ಆರ್ಚಾರ್ಯರವರು ಇಸ್ಲಾಮಾಬಾದ್ನಿಂದ ಹೊರಟರೆಂದು ಅಧಿಕೃತವಾಗಿ ತಿಳಿದುಬಂದಿದೆ.