50 ವರ್ಷಗಳ ಹಿಂದೆ: ಭಾನುವಾರ, ಜುಲೈ 4,1971

ತಿರುವನಂತಪುರ, ಜುಲೈ 3– ಅಂತರರಾಜ್ಯ ಜಲವಿವಾದ ಶಾಸನದ ಪ್ರಕಾರ, ಕೇರಳ, ಮೈಸೂರು ಮತ್ತು ತಮಿಳುನಾಡುಗಳ ಮಧ್ಯೆ ಇರುವ ಕಾವೇರಿ ಜಲ ವಿವಾದವನ್ನು ನ್ಯಾಯ ಮಂಡಲಿ ಇತ್ಯರ್ಥಕ್ಕೆ ಒಪ್ಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೇರಳ ಆಗ್ರಹಪಡಿಸಲಿದೆಯೆಂದು ಕೇರಳದ ಕಾಮಗಾರಿ ಸಚಿವ ವಿ.ಕೆ. ದಿವಾಕರನ್ ಇಂದು ತಿಳಿಸಿದರು.
ಕೇಂದ್ರ ನೀರಾವರಿ ಹಾಗೂ ವಿದ್ಯುತ್ ಸಚಿವ ಡಾ. ಕೆ.ಎಲ್. ರಾವ್ ನೇತೃತ್ವದಲ್ಲಿ ನಡೆದ ಸಂಧಾನ ಯಶಸ್ವಿಯಾಗದೆ ಹೋಗಿರುವುದರಿಂದ, ನ್ಯಾಯ ಮಂಡಳಿಗೆ ವಿವಾದ ಸಲ್ಲಿಸುವುದೊಂದೇ ಈಗಿರುವ ಮಾರ್ಗವೆಂದು ಅವರು ನುಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.