ಹೇಮಾವತಿ, ಕಪಿಲಾ ಯೋಜನೆತಡೆಗೆ ಕೇರಳದ ಹೊಸ ದಾವಾ
ನವದೆಹಲಿ, ಸೆ. 21– ಕಾವೇರಿ ಜಲಾನಯನ ಪ್ರದೇಶದಲ್ಲಿ ಹೇಮಾವತಿ ಮತ್ತು ಕಪಿಲಾ ಯೋಜನೆಗಳ ಕೆಲಸವನ್ನು ಮೈಸೂರು ಸರ್ಕಾರ ಮುಂದುವರಿಸದಂತೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕೇರಳ ಸರ್ಕಾರವು ಇಂದು ಸುಪ್ರೀಂ ಕೋರ್ಟ್ನಲ್ಲಿ ಸಂವಿಧಾನದ 131ನೇ ವಿಧಿ ಪ್ರಕಾರ ಹೊಸ ದಾವಾ ಹೂಡಿದೆ.