ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ ಸೋಮವಾರ 11.10.1971

Last Updated 10 ಅಕ್ಟೋಬರ್ 2021, 19:53 IST
ಅಕ್ಷರ ಗಾತ್ರ

ಸರ್ಕಾರಿ ಉದ್ಯಮ ಕ್ಷೇತ್ರಕ್ಕೆಶೀಘ್ರವೇ ಕಾಯಕಲ್ಪ ಸಮಿತಿ

ಕೈಲಾಸ ನಗರ, ಅ. 10– ಸರ್ಕಾರಿ ವ್ಯಾಪ್ತಿಗೆ ಸೇರಿದ ಕಾರ್ಖಾನೆಗಳಲ್ಲಿ ಕಾರ್ಯವಿಧಾನ ಗಳನ್ನು ಪರಿಣಾಮಕರವಾಗಿ ಸುಧಾರಿಸುವಂತೆ ಮಾಡಲು ಸರ್ಕಾರವು ಶೀಘ್ರವೇ ಉನ್ನತಾಧಿ ಕಾರ ಸಮಿತಿಯೊಂದನ್ನು ನೇಮಿಸುವುದು.

ಆಡಳಿತ ಕ್ರಮದಲ್ಲಿ ಸುಧಾರಣೆ, ಕಾರ್ಮಿಕರ ಪಾತ್ರ, ಅವರಿಗೆ ನೀಡುವ ಪ್ರೋತ್ಸಾಹ ಹಾಗೂ ದರ ನಿಗದಿ ನೀತಿಗಳ ಕುರಿತು ಈ ಸಮಿತಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸುವುದು.

ಕೂಡಲಿ ಶೃಂಗೇರಿ ಮಠದ ನೂತನ ಪೀಠಾಧೀಶರಿಂದ ಅಧಿಕಾರ ಸ್ವೀಕಾರ

ಮೈಸೂರು, ಅ. 10– ಕೂಡಲಿ ಶೃಂಗೇರಿ ಮಠದ ನೂತನ ಪೀಠಾಧಿಪತಿಗಳಾಗಿಶ್ರೀವಿದ್ಯಾಭಿನವ ನರಸಿಂಹ ಭಾರತಿ ಸ್ವಾಮಿಗಳು (ಗೌರೀಪುರದ ಶ್ರೀ ಚಿಂತಾಮಣಿ ಸ್ವಾಮಿಗಳು) ಇಂದು ಇಲ್ಲಿ ಅಧಿಕಾರ ವಹಿಸಿ ಕೊಂಡರು.

ಕೂಡಲಿ ಶೃಂಗೇರಿ ಪೀಠಾಧೀಶರಾಗಿದ್ದ ಶ್ರೀ ಶಂಕರ ಭಾರತಿ ಸ್ವಾಮಿಗಳು ನಿಧನರಾದ ನಂತರ, 11 ತಿಂಗಳಿಂದ ಪೀಠಾಧೀಶರ ಸ್ಥಾನ ತೆರವಾಗಿ ಉಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT