ಹೊಸ ಶ್ರೀಮಂತ ರೈತರ ಮೇಲಿನ ತೆರಿಗೆ ಏರಿಕೆ ಆಲೋಚನೆ ನ್ಯಾಯಬದ್ಧ ನವದೆಹಲಿ, ಅ. 24– ಗ್ರಾಮಾಂತರದ ಹೊಸ ಶ್ರೀಮಂತ ರೈತರ ಮೇಲೆ ತೆರಿಗೆ ಹೆಚ್ಚಿಸುವುದಕ್ಕೆ ಸಕಾರಣಗಳಿವೆಯೆಂಬುದು ಯೋಜನಾ ಆಯೋಗದ ಅಭಿಪ್ರಾಯ.
‘ವ್ಯವಸಾಯ ರಂಗದ ಮೇಲೆ ಇರುವ ನೇರ ತೆರಿಗೆ ಎಂದರೆ ಕಂದಾಯ. ಅದನ್ನು ಎಕರೆ ಭೂಮಿಗೆ ಏಕರೀತಿಯ ದರದಲ್ಲಿವಿಧಿಸಲಾಗುತ್ತಿದೆ. ಆದರೆ ಕಂದಾಯದ ದರಕ್ಕೂ ವರಮಾನ ಮತ್ತು ಬೆಲೆಗಳ ಬದಲಾ ವಣೆಗೂ ಯಾವ ಬಗೆಯ ಸಂಬಂಧವಿಲ್ಲದಂತಾಗಿದೆ’ ಎಂದು ಆಯೋಗವು ಯೋಜನಾ ಸಚಿವ ಶಾಖೆಯ ಸಲಹಾ ಸಮಿತಿಯ ಸದಸ್ಯರಿಗೆ ಹಂಚಿರುವ ಟಿಪ್ಪಣಿಯೊಂದರಲ್ಲಿ ತಿಳಿಸಿದೆ.