ನವದೆಹಲಿ, ಡಿ. 7– ಬಾಂಗ್ಲಾದೇಶದಲ್ಲಿ ಪ್ರತಿಷ್ಠಿತ ಆಯಕಟ್ಟಿನ ಕೇಂದ್ರಗಳಾದ ಜೆಸ್ಸೂರು, ಸಿಲ್ಹೆಟ್, ಮೆಹರ್ಪುರಗಳ ಪತನ ಭಾರತೀಯ ಪಡೆಗಳ ಇಂದಿನ ಮಹತ್ತರ ಸಾಧನೆ. ಪೂರ್ವ ವಲಯದಲ್ಲಿ ಕೊಮಿಲ್ಲಾ ಮುತ್ತಿಗೆಗೆ ಒಳಗಾಗಿದ್ದು ಯಾವ ಗಳಿಗೆಯಲ್ಲಾದರೂ ಪತನಗೊಳ್ಳುವ ಸ್ಥಿತಿಯಲ್ಲಿದೆ.
ಲಾಲ್ ಮುನೀರ್ ಹಾತ್, ಜೇಂಡಿಯಾ ಮುಂತಾದ ಸ್ಥಳಗಳು ವಿಮೋಚನೆಗೊಂಡಿವೆ.
ಪಾಕ್ ಆಕ್ರಮಿತ ಕಾಶ್ಮೀರದ ಕೆಲವು ಭಾಗಗಳು ವಿಮುಕ್ತ
ಶ್ರೀನಗರ, ಡಿ. 7– ತಿತ್ವಾಲ್ ವಿಭಾಗದ ಎದುರಿಗೆ ಇರುವ ಪಾಕ್ ಆಕ್ರಮಿತ ಕಾಶ್ಮೀರದ ಕೆಲವು ಭಾಗಗಳನ್ನು ಭಾರತೀಯ ಸಶಸ್ತ್ರ ಸೈನಿಕರು ವಿಮೋಚನೆಗೊಳಿಸಿದರು ಎಂದು ಅಧಿಕೃತ ವಕ್ತಾರರು ಇಂದು ತಿಳಿಸಿದರು.
ಪಾಕಿಸ್ತಾನಿ ಸೈನಿಕರೊಡನೆ ಹೋರಾಟ ನಡೆಸಿ ಈ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತೆಂದೂ ಈ ವಕ್ತಾರರು ಹೇಳಿದರು.