ಎಂ.ಪಿ.ಸಿ.ಸಿ ಅಧ್ಯಕ್ಷ ಶ್ರೀ ದೇವರಾಜ ಅರಸು ಅವರು, ಸಮಿತಿಯ ಕೆಲಸ ಸುಗಮವಾಗಿ ನಡೆಯುತ್ತಿದೆಯೆಂದು ಹೇಳಿಕೊಂಡಿದ್ದರೂ ಉಮೇದುವಾರಿಕೆ ಬಯಸಿರುವವರ ಸ್ಥಾನಮಾನ ಮತ್ತು ಕೋಮುಗಳ ಆಧಾರದ ಮೇಲೆ ತೀವ್ರ ಚೌಕಾಶಿನಡೆಯುತ್ತಿರುವಂತಿದೆ. ಯಾವುದೇ ಆಯ್ಕೆಯಲ್ಲಿ ಇವುಗಳ ಪರಿಗಣನೆ ಅನಿವಾರ್ಯವೆನಿಸಿದರೂ ಅದರಿಂದ ಸರಿಯಿಲ್ಲದಂತಹಉಮೇದುವಾರರನ್ನು ಆರಿಸಿದಂತೆ ಆಗಬಾರದು ಎಂದು ಕೆಲವರು ವಾದಿಸುತ್ತಿದ್ದಾರೆ.