ಅಡಿಸ್ ಅಬಾಬಾ, ಜ. 29– ಪ್ರಧಾನಿ ಇಂದಿರಾ ಗಾಂಧಿ ಅವರು ಭದ್ರತಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಶುಭಾಶಯಗಳನ್ನು ಕೋರಿ ಭದ್ರತಾ ಸಮಿತಿ ಸಭೆಯು ವಸಾಹತು ಷಾಹಿ, ವರ್ಣಭೇದ ಮತ್ತು ಜನಾಂಗ ಭೇದ ಶಕ್ತಿಗಳನ್ನು ದಮನ ಮಾಡುವುದೇ ಅಲ್ಲದೆ ಮೂಲೋತ್ಪಾಟನೆ ಮಾಡಲು ಕ್ರಮಗಳನ್ನು ಕೈಗೊಳ್ಳಲಿ ಎಂದು ಆಶಿಸಿದ್ದಾರೆ. ‘ಭದ್ರತಾ ಸಮಿತಿಯ ಸದಸ್ಯ ರಾಷ್ಟ್ರವಾಗಿರುವ ಭಾರತವು ದಮನಕ್ಕೆ ಒಳಗಾಗಿರುವವರ ಸ್ವಾತಂತ್ರ್ಯ, ಸಮಾನತೆಹಕ್ಕುಗಳನ್ನು ಬೆಂಬಲಿಸಲಿದೆ’ ಎಂದೂ ಪ್ರಧಾನಿ ತಿಳಿಸಿದ್ದಾರೆ.