ಹರಿಜನ–ಗಿರಿಜನ ಸಂಸಾರಗಳಿಗೆ 22 ಕೋಟಿ 50 ಲಕ್ಷ ರೂ. ಗಳು, ಇತರ ಕೃಷಿಕಾರ್ಮಿಕ ಸಂಸಾರಗಳಿಗೆ 15 ಕೋಟಿ ರೂ.ಗಳು ವಾರ್ಷಿಕವಾಗಿ ವೆಚ್ಚ ತಗಲಬಹುದೆಂದು ಆಯೋಗ ಅಂದಾಜುಮಾಡಿದೆ. ಬಡಜನತೆಗೆ ಉಚಿತ ನಿವೇಶನ ಯೋಜನೆ ಜತೆಗೆ ಅರಣ್ಯ ಸಂಪನ್ಮೂಲದ ಸೂಕ್ತ ಬಳಕೆ, ಮಣ್ಣಿನ ಗುಣ ತಿಳಿಸುವ ಭಾರತ ಭೂಪಟ ತಯಾರಿಕೆ ಹಾಗೂ ಆಲೂಗಡ್ಡೆ ಬೀಜೋತ್ಪಾದನೆ ಕುರಿತ ಯೋಜನೆಗಳು ಆಯೋಗದ ವರದಿಯಲ್ಲಿವೆ.