ಶ್ರೀ ಅರಸು ಅವರು ತಮ್ಮ ಈ ದೆಹಲಿ ಭೇಟಿಯ ಅವಕಾಶವನ್ನು ಉಪಯೋಗಿಸಿಕೊಂಡು ಕೇಂದ್ರ ನಾಯಕರಿಗೆ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿ, ನಗರಕ್ಕೆ ಶ್ರೀ ಯಶಪಾಲ್ ಕಪೂರ್ ಅವರ ಭೇಟಿ ನಂತರದ ಅವರ ಪತ್ರಿಕಾಗೋಷ್ಠಿ ಹಾಗೂ ಅನಂತರದ ಶ್ರೀ.ಕೆ.ಹನುಮಂತಯ್ಯ ಅವರ ಪತ್ರಿಕಾಗೋಷ್ಠಿ ಎಬ್ಬಿಸಿರುವ ವಾದ ವಿವಾದಗಳನ್ನು ಸ್ಪಷ್ಟಪಡಿಸುವರು ಎಂದು ನಿರೀಕ್ಷಿಸಲಾಗಿದೆ.