ನಿನ್ನೆ ರಾತ್ರಿ ಇಲ್ಲಿಗೆ ಆಗಮಿಸಿದ ಅರಸು ಅವರು ಪ್ರಧಾನಿ, ಕಾಂಗ್ರೆಸ್ ಅಧ್ಯಕ್ಷ ಶಂಕರ್ ದಯಾಳ್ ಶರ್ಮಾ ಹಾಗೂ ಕೇಂದ್ರ ವಸತಿ ಸಚಿವ ಉಮಾಶಂಕರ್ ದೀಕ್ಷಿತ್ ಅವರನ್ನೂ ಭೇಟಿ ಮಾಡಿದ್ದರು. ಅರಸು ಅವರು ಮೈಸೂರು ನಾಯಕತ್ವಕ್ಕೆ ಹನುಮಂತಯ್ಯ
ನವರು ಹಾಕಿರುವ ಸವಾಲಿನ ಬೆಳಕಿನಲ್ಲಿ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನೂ, ಭೂಪರಿಮಿತಿ ವಿಷಯವನ್ನೂ ಪ್ರಧಾನಿ ಯೊಡನೆ ಚರ್ಚಿಸಿದರೆಂದು ಗೊತ್ತಾಗಿದೆ.