ತಮಿಳುನಾಡು ವಿಧಾನಸಭೆವಿಸರ್ಜನೆಗೆ ಸ್ಪೀಕರ್ ಸಲಹೆ:3 ವಾರ ಅಧಿವೇಶನ ಮುಂದಕ್ಕೆ
ಮದ್ರಾಸ್, ನ. 13– ಉದ್ವಿಗ್ನಭರಿತವಾತಾವರಣದಲ್ಲಿ ಇಂದು ತನ್ನಚಳಿಗಾಲದ ಅಧಿವೇಶನ ಪ್ರಾರಂಭಿಸಿದ ತಮಿಳುನಾಡು ವಿಧಾನಸಭೆಯಲ್ಲಿ ಅಧ್ಯಕ್ಷ ಕೆ.ಎ. ಮತಿಯಳಗನ್ ಅವರು ಜನತೆಯಿಂದ ‘ಹೊಸ ಆದೇಶ’ ಪಡೆಯುವಂತೆ ಅಧಿಕಾರಾರೂಢ ಡಿಎಂಕೆ ಪಕ್ಷಕ್ಕೆ ಸಲಹೆ ನೀಡಿ, ಅತ್ಯಂತ ಅನಿರೀಕ್ಷಿತವಾಗಿ ಡಿಸೆಂಬರ್ 5ರವರೆಗೆ ಮುಂದಕ್ಕೆ ಹಾಕಿದರು.