ಪಾಕಿಸ್ತಾನದ ಬಗೆಗೆ ಭಾರತದ ಸಹಾನುಭೂತಿಗೆ ಭುಟ್ಟೋ ಕರೆ ಮುಂಬೈ, ನ. 15– ಪಾಕಿಸ್ತಾನದ ಪರಿಸ್ಥಿತಿಯನ್ನು ಉಭಯ ದೇಶಗಳ ಸೌಹಾರ್ದಯುತ ಸಂಬಂಧದ ದೃಷ್ಟಿಯಿಂದ ಭಾರತವು ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳಬೇಕು ಎಂದು ಅಧ್ಯಕ್ಷ ಭುಟ್ಟೋ ಮನವಿ ಮಾಡಿಕೊಂಡಿದ್ದಾರೆ.
ಏಕೆಂದರೆ ಪಾಕಿಸ್ತಾನವು ಎರಡು ಅತಿ ಕ್ಲಿಷ್ಟಕರ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಅರಸು ಸಂಪುಟದ ವಿರುದ್ಧ ಅವಿಶ್ವಾಸ ಸೂಚನೆ ಮಂಡನೆ ಕಲ್ಬುರ್ಗಿ, ನ. 15– ರಾಜ್ಯದ ವಿಧಾನ ಮಂಡಲದ ಮುಂಬರುವ ಅಧಿವೇಶನದಲ್ಲಿ ಅರಸು ಮಂತ್ರಿಮಂಡಲದ ವಿರುದ್ಧ ಸಂಸ್ಥಾ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸುವುದೆಂದು ಪಕ್ಷದ ಮೂಲಗಳು ತಿಳಿಸಿವೆ.
ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಕ್ಷಾಮ ಪರಿಸ್ಥಿತಿ ಎದುರಿಸುವಲ್ಲಿ ಅರಸು ನೇತೃತ್ವದ ಸರ್ಕಾರ ವಿಫಲವಾಗಿದೆಯೆಂದು ಸಂಸ್ಥಾ ಕಾಂಗ್ರೆಸ್ ಭಾವಿಸಿದೆ.