ಚರ್ಚೆ ಮುಗಿದು ನಿರ್ಣಯ ಇಂದೇ ಅಂಗೀಕಾರವಾಗಬೇಕೆಂದಿದ್ದರೂ, ಸದಸ್ಯರ ಮಾತಿನ ಉತ್ಸಾಹವನ್ನನುಸರಿಸಿ, ಚರ್ಚೆಯನ್ನು ನಾಳೆಯೂ ಮುಂದುವರಿಸಲು ಅಧ್ಯಕ್ಷೆ ಶ್ರೀಮತಿ ಕೆ.ಎಸ್.ನಾಗರತ್ನಮ್ಮ ಅವರು ಅವಕಾಶ ನೀಡಿದರು. ರಾಹುಕಾಲದ ಆರಂಭಕ್ಕೆ ಮುಂಚಿತವಾಗಿ, ಮಧ್ಯಾಹ್ನ ಎರಡೂವರೆ ಗಂಟೆಗೆ ಅರಸು ಅವರು ಸಭೆಯ ಮುಂದೆ ನಿರ್ಣಯ ಮುಂದಿಟ್ಟರು.