ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷದ ಹಿಂದೆ: 28-6-1992

Last Updated 28 ಜೂನ್ 2022, 2:02 IST
ಅಕ್ಷರ ಗಾತ್ರ

ಮಲಪ್ರಭಾದಲ್ಲಿ ಮಹಾಪೂರ:ಆರು ಗ್ರಾಮಗಳ ಮುಳುಗಡೆ

ಬೆಂಗಳೂರು, ಜೂನ್‌ 27– ಮಲಪ್ರಭಾ ನದಿಗೆ ಭಾರಿ ಮಳೆಯ ಪರಿಣಾಮ ಮಹಾಪೂರ್‌ ಬಂದು ಬೆಳಗಾವಿ ಜಿಲ್ಲೆಯ 33 ಗ್ರಾಮಗಳಿಗೆ ಗಂಡಾಂತರ ಪರಿಸ್ಥಿತಿ ಉಂಟಾಗಿದೆ ಎಂದು ಇಲ್ಲಿಗೆ ಬಂದ ಅಧಿಕೃತ ವರದಿಗಳಿಂದ ತಿಳಿದುಬಂದಿದೆ.

ಈ ಎಲ್ಲ ಹಳ್ಳಿಗಳನ್ನು ತೆರವು ಮಾಡಬೇಕೆಂದು ಅಲ್ಲಿನ ನಿವಾಸಿಗಳಿಗೆ ಸರ್ಕಾರ ಆದೇಶ ನೀಡಿದೆ. ಆರು ಹಳ್ಳಿಗಳು ಮುಳುಗಡೆ ಪರಿಸ್ಥಿತಿಗೆ ಗುರಿಯಾಗಿದ್ದು, ಇನ್ನು 24 ಗಂಟೆಗಳಲ್ಲಿ ತೆರವು ಮಾಡಬೇಕೆಂದು ಗ್ರಾಮ ನಿವಾಸಿಗಳಿಗೆ ಆದೇಶ ನೀಡಲಾಗಿದೆ.

ನಗರ ಆಸ್ತಿ ವಿಲೇವಾರಿ ವಿರುದ್ಧ ಸರ್ಕಾರದ ಕ್ರಮ

ಬೆಂಗಳೂರು, ಜೂನ್ 27– ನಗರ ಆಸ್ತಿಗೆ ಎರಡು ಲಕ್ಷ ರೂ. ಮಿತಿ ವಿಧಿಸಬೇಕೆಂಬಯತ್ನವನ್ನು ತಪ್ಪಿಸಿಕೊಳ್ಳಲು ಹಲವು ಶ್ರೀಮಂತರು ಮಿತಿಗೆ ಮೀರಿದ ಆಸ್ತಿ ವಿಲೇವಾರಿ ಮಾಡುತ್ತಿರುವುದಕ್ಕೆ ತಡೆ ಹಾಕುವ ಬಗ್ಗೆ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳುವ ಸಂಭವವಿದೆ.

ಈ ವಿಚಾರವನ್ನು ಇಂದು ವರದಿಗಾರರೊಡನೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಶ್ರಿ ಡಿ.ದೇವರಾಜ ಅರಸ್‌ ಅವರು ಪರೋಕ್ಷವಾಗಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT