ನವದೆಹಲಿ, ಮಾರ್ಚ್ 23– ಆಡಳಿತ ಕಾಂಗ್ರೆಸ್ಸಿನ ಚುನಾವಣೆ ಪ್ರಣಾಳಿಕೆಯಲ್ಲಿ ನಮೂದಿಸಿರುವ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಕುರಿತ ಕಾರ್ಯಕ್ರಮವನ್ನು ಜಾರಿಗೆ ತರಲು ತಮ್ಮ ಹೊಸ ಸರ್ಕಾರ ಬದ್ಧವಾಗಿರುವುದಾಗಿ ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಹರ್ಷೋದ್ಗಾರಗಳ ಮಧ್ಯೆ ಇಂದು ಸಂಸತ್ನ ಜಂಟಿ ಅಧಿವೇಶನದಲ್ಲಿ ತಿಳಿಸಿದರು.