ವಿಜಯವಾಡ, ಡಿಸೆಂಬರ್ 24– ಪ್ರತ್ಯೇಕ ಆಂಧ್ರವಾದಿ ಚಳವಳಿಕಾರರು ಪೊಲೀಸರ ಮೇಲೆ ಕಲ್ಲೆಸೆದು ಹಿಂಸಾಚಾರಕ್ಕೆ ತೊಡಗಿದಾಗ ಮತ್ತು ಗೌರ್ನರ್ಪೇಟೆ ಪ್ರದೇಶದಲ್ಲಿ ವಿಭಜನೆ ವಿರೋಧಿಗಳು ಮೆರವಣಿಗೆ ಹೊರಟಾಗ ಗೊಂದಲ ನಡೆದು ಇಂದು ರಾತ್ರಿ ಕೇಂದ್ರ ರಿಸರ್ವ್ ಪೊಲೀಸರು ಐದು ಸುತ್ತು ಗುಂಡು ಹಾರಿಸಿದರು. ಗೋಲಿಬಾರ್ನಿಂದ ಕನಿಷ್ಠ ಮೂವರು ಸತ್ತಿರುವರೆಂದು ಶಂಕಿಸಲಾಗಿದೆ.