ಮಲೆನಾಡು ಅಭಿವೃದ್ಧಿ ಅಧ್ಯಯನಕ್ಕೆ ಮಂಡಳಿ: ಕೇಂದ್ರ ಸರ್ಕಾರದ ನಿರ್ಧಾರ
ಬೆಂಗಳೂರು, ಮೇ 27– ಮಲೆನಾಡು ಪ್ರದೇಶವೂ ಸೇರಿ ಪಶ್ಚಿಮ ಘಟ್ಟ ಪ್ರದೇಶಗಳ ಅಭಿವೃದ್ಧಿ ಕುರಿತು ಅಧ್ಯಯನಕ್ಕಾಗಿ ಮಂಡಳಿಯೊಂದನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಎರಡು ದಿನಗಳ ಮೈಸೂರು ರಾಜ್ಯ ಮಲೆನಾಡು ಅಭಿವೃದ್ಧಿ ಕುರಿತ ಸಮ್ಮೇಳನಕ್ಕೆ ಕೇಂದ್ರ ಭಾರಿ ಕೈಗಾರಿಕಾ ಖಾತೆ ಸಚಿವ ಟಿ.ಎ. ಪೈ ಅವರು ಕಳುಹಿಸಿದ ತಂತಿಯಲ್ಲಿ ಈ ಅಂಶ ತಿಳಿಸಿದ್ದಾರೆ.