ಕೈಗಡಿಯಾರಗಳನ್ನು ಬಿಡುಗಡೆ ಮಾಡಿದ ರಾಜ್ಯ ಕೈಗಾರಿಕಾ ಮಂತ್ರಿ ಎಸ್.ಎಂ. ಕೃಷ್ಣ ಅವರು, ಇಬ್ಬರಿಗೂ, ವೇದಿಕೆ ಮೇಲಿದ್ದ ಇತರರಿಗೂ ಕೈಗಡಿಯಾರಗಳನ್ನು ಹಂಚಿದರು. ತಕ್ಷಣ ಏನೋ ಹೊಳೆದಂತೆ ಎದ್ದು ನಿಂತ ಸುಬ್ರಹ್ಮಣ್ಯಂ ಅವರು, ‘ಇವುಗಳನ್ನು ಬಹುಮಾನವಾಗಿ ನಮಗೆ ಕೊಟ್ಟಿದ್ದಾರೆ. ಆದರೆ ನಾವು ಅದನ್ನು ಕೊಳ್ಳಲಿದ್ದೇವೆ. ನಾವು ಪ್ರತಿಯೊಬ್ಬರು ಹಣ ಕೊಡುತ್ತೇವೆ’ ಎಂದರು.