ಬೆಂಗಳೂರು, ಆ. 2– ಬಹುಸಂಖ್ಯಾತ ಜಾತಿಗಳನ್ನು ಈಗಿನ ಸರ್ಕಾರ ತುಳಿಯಲು ಪ್ರಯತ್ನಿಸುತ್ತಿದೆ ಎಂದ ಆಪಾದನೆಗಳನ್ನು ವಿಧಾನಸಭೆಯಲ್ಲಿ ಇಂದು ಸ್ಪಷ್ಟವಾಗಿ ನಿರಾ ಕರಿಸಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು, ಜಾತಿ ಹೆಸರೆತ್ತಿ ತಮ್ಮ ಮೇಲೆ ತಿರುಗಿಬಿದ್ದರೆ, ‘ಆ ಆಟ ನಡೆಯೋಲ್ಲ’ ಎಂದು ಸಂಸ್ಥಾ ಕಾಂಗ್ರೆಸ್ಸಿಗರಿಗೆ ಬಿಡಿಸಿ ಹೇಳಿದರು.