ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ, 5-8-1972

Last Updated 4 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ರಾಜ್ಯಗಳಿಗೆ ಎಲ್ಲ ಕೃಷಿ ಅಗತ್ಯಗಳ ತುರ್ತು ಪೂರೈಕೆ: ಕೇಂದ್ರ ಕೃಷಿ ಖಾತೆ ಸುತ್ತೋಲೆ

ನವದೆಹಲಿ, ಅ.4– ದೇಶದ ಬಹುಭಾಗಗಳಲ್ಲಿ ಸಾಕಷ್ಟು ಮಳೆ ಬೀಳದೆ ಉಂಟಾಗಿರುವ ಗಂಭೀರ ಅಭಾವ ಪ‍ರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಕೇಂದ್ರ ಕೃಷಿ ಸಚಿವ ಖಾತೆ ಇಂದು ತ್ವರಿತಗತಿಯಲ್ಲಿ ಕಾರ್ಯೋನ್ಮುಖವಾಯಿತು.

ತುರ್ತು ಆದ್ಯತೆ ನೀಡಿ, ಕೊರತೆ ನೀಗಲು ಪೂರ್ಣ ಧನಸಹಾಯ ನೀಡುವ ಭರವಸೆಯಿತ್ತು, ರಾಜ್ಯ ಸರ್ಕಾರಗಳು ಕೂಡಲೇ ಸಾಕಷ್ಟು ಮಳೆಯಾಗದೆ ಹಾಗೂ ಬಹುಕಾಲದಿಂದ ಅನಾವೃಷ್ಟಿಯ ಕಾರಣ ಉಂಟಾಗಿರುವ ನಷ್ಟ ಎಷ್ಟೆಂಬುದನ್ನು ತಿಳಿಸಬೇಕು ಎಂದು ಕೇಳಿದೆ.

ಈಗಿನ ಅಭಾವಸ್ಥಿತಿಯ ನಿವಾರಣೆಗೆ ಸರ್ವ ಪ್ರಯತ್ನ ನಡೆಸಬೇಕೆಂದು ರಾಜ್ಯ ಸರ್ಕಾರಗಳಿಗೆ ತಿಳಿಸಿದೆ.

ದುರ್ಬಲ ವರ್ಗಗಳ ಜನರಿಗೆ ನೆರವಾಗುವ ಸರ್ಕಾರದ ನೀತಿ ಅರಿಯಲು ಪೊಲೀಸರಿಗೆ ಕರೆ

ಬೆಂಗಳೂರು, ಅ.4– ದುರ್ಬಲ ವರ್ಗಗಳವರಿಗೆ ನೆರವಾಗುವ ಹಾಲಿ ಸರ್ಕಾರದ ಧೋರಣೆಯನ್ನು ಅರಿತುಕೊಂಡು ಪೊಲೀಸರು ಆ ರೀತಿ ನಡೆಯಬೇಕೆಂದು ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

‘ಇದುವರೆಗೆ ಆಸ್ತಿವಂತರು ಮತ್ತು ಸಮಾಜದಲ್ಲಿ ಮೇಲ್ಮಟ್ಟದಲ್ಲಿರುವವರ ಕಡೆಗೆ ಒಲವು ತೋರಿಸಲಾಗುತ್ತಿತ್ತು. ಈಗಿನ ಸರ್ಕಾರದ ಒಲವು ಬಡವರ ಕಡೆಗೆ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT