ಮುಂಬೈ, ಜೂನ್ 12– ನಿಲುವಳಿ ಸೂಚನೆಯೊಂದಕ್ಕೆ ಅವಕಾಶವೀಯದ ಸ್ಪೀಕರರ ತೀರ್ಪಿನ ವಿರುದ್ಧ ಪ್ರತಿಭಟನೆ ಸೂಚಿಸಲು ಇಡೀ ವಿರೋಧಪಕ್ಷದ ಸಭಾತ್ಯಾಗ, ಪ್ರೇಕ್ಷಕರ ಗ್ಯಾಲರಿಯಿಂದ ರಿಪಬ್ಲಿಕನ್ ಪಕ್ಷದ ಯುವಕರಿಬ್ಬರ ಕಲ್ಲೆಸತ ಹಾಗೂ ಕರಪತ್ರಗಳ ದಹನದೊಡನೆ ಮಹಾರಾಷ್ಟ್ರ ವಿಧಾನಸಭೆಯ ಎರಡು ತಿಂಗಳ ಸುದೀರ್ಘ ಮಳೆಗಾಲ ಅಧಿವೇಶನ ಇಂದು ಪ್ರಾರಂಭವಾಯಿತು.