ಬೆಂಗಳೂರು,ಅಕ್ಟೋಬರ್ 29– ಪ್ರಸ್ತುತ ರಾಜ್ಯ ವಿಧಾನ ಮಂಡಲದ ಮುಂದಿರುವ ಭೂ ಸುಧಾರಣಾ (ತಿದ್ದುಪಡಿ) ವಿಧೇಯಕದಲ್ಲಿ ಪ್ಲಾಂಟೇಷನ್ಗಳಿಗೆ ಭೂಮಿತಿಯಿಂದ ವಿನಾಯಿತಿ ನೀಡಲಾಗಿದೆಯಾದರೂ, ಆ ಬಗ್ಗೆ ಕೇಂದ್ರದ ಮಾರ್ಗದರ್ಶನದಂತೆ ರಾಜ್ಯ ಸರ್ಕಾರ ನಡೆಯಲಿದೆ ಎಂದು ಮೈಸೂರು ರಾಜ್ಯದ ಪ್ಲಾಂಟರುಗಳ ಸಂಘದ 14ನೇ ವಾರ್ಷಿಕ ಸಮ್ಮೇಳನದಲ್ಲಿ ಕೈಗಾರಿಕಾ ಸಚಿವ ಎಸ್.ಎಂ. ಕೃಷ್ಣ ತಿಳಿಸಿದರು.