ಪುಸ್ತಕ ಪ್ರಕಟಣೆ, ಪ್ರಾದೇಶಿಕ ಭಾಷಾಭಿವೃದ್ಧಿಗೆ ರಾಜ್ಯಗಳಿಗೆ ಕೇಂದ್ರದ ನೆರವಿನ ಆಶ್ವಾಸನೆ
ಮದ್ರಾಸ್, ಸೆ. 23– ಪುಸ್ತಕ ಪ್ರಕಟಣೆ ಕಾರ್ಯಕ್ರಮಕ್ಕೆ ಮತ್ತು ಉನ್ನತ ಶಿಕ್ಷಣ ಹಂತಗಳಲ್ಲಿ ಶಿಕ್ಷಣ ಮಾಧ್ಯಮವಾಗಿ ಪ್ರಾದೇಶಿಕ ಭಾಷೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಗಣನೀಯ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುವುದಾಗಿ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಖಾತೆ ಉಪ ಸಚಿವ ಡಿ.ಪಿ. ಯಾದವ್ ಇಂದು ಆಶ್ವಾಸನೆ ನೀಡಿದರು.