ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ 27.7.1972

Last Updated 26 ಜುಲೈ 2022, 16:58 IST
ಅಕ್ಷರ ಗಾತ್ರ

‘ಕರ್ನಾಟಕ’ ನಾಮಕರಣಕ್ಕೆ ಸ್ವಾಗತ ಮೈಸೂರು ಹಿರಿಮೆಯ ಸ್ಮರಣೆ

ಬೆಂಗಳೂರು. ಜುಲೈ 26– ‘ಕರ್ನಾಟಕ’ವನ್ನು ಸ್ವಾಗತಿಸುತ್ತ ಮೈಸೂರು ಎಂಬ ಹೆಸರಿಗೆ ಇರುವ ಹಿರಿಮೆ, ಸಂಸ್ಕೃತಿ, ಸದಭಿಪ್ರಾಯಗಳ ಸ್ಮರಣೆಯು ಇಂದು ವಿಧಾನಸಭೆಯಲ್ಲಿ ಮುಕ್ತಕಂಠದಿಂದ ನಡೆಯಿತು.

ರಾಜ್ಯಕ್ಕೆ ‘ಕರ್ನಾಟಕ’ ಮರುನಾಮಕರಣ ಮಾಡುವ ನಿರ್ಣಯದ ಮೇಲಿನ ಚರ್ಚೆಯ ಎರಡನೇ ದಿನವಾದ ಇಂದು ಮಾತನಾಡಿದ ಹದಿನೈದು ಸದಸ್ಯರು, ನಿನ್ನೆಯವರಂತೆ ನಿರ್ಣಯಕ್ಕೆ ಬೆಂಬಲ ಸೂಚಿಸಿದರು.

ಆರೋಗ್ಯ ಸೆಸ್ ವಿಧಿಸಲು ಸಲಹೆ

ನವದೆಹಲಿ, ಜುಲೈ 26– ಜನರಿಗೆ ಕನಿಷ್ಠ ಮಟ್ಟದ ವೈದ್ಯಕೀಯ ಸೌಕರ್ಯ ಕಲ್ಪಿಸುವುದ ಕ್ಕಾಗಿ ಸಂಪನ್ಮೂಲ ಹೆಚ್ಚಿಸಲು ಆರೋಗ್ಯ ಸೆಸ್ ಅಥವಾ ನೇರ ಶುಲ್ಕ ವಿಧಿಸುವಂತೆ ರಾಜ್ಯ ಆರೋಗ್ಯ ಸಚಿವರ ಎರಡು ದಿನಗಳ ಸಮ್ಮೇಳನ ಇಂದು ಶಿಫಾರಸು ಮಾಡಿತು.

ಸೆಸ್ ವಿಧಿಸುವುದು ಸ್ಥಳೀಯ ಪರಿಸ್ಥಿತಿಯನ್ನು ಅವಲಂಬಿಸಬಹುದೆಂದೂ ಸಮ್ಮೇಳನ ಅಭಿಪ್ರಾಯಪಟ್ಟಿತು.

ಗ್ರಾಮಾಂತರ ಪ್ರದೇಶಗಳ ಬಗ್ಗೆ ರಾಷ್ಟ್ರೀಯ ಆರೋಗ್ಯ ಯೋಜನೆ ವಿವರವನ್ನು ಪರಿಶೀಲಿಸುವುದಕ್ಕಾಗಿ ಉನ್ನತಾಧಿಕಾರದ ಸಮಿತಿಯೊಂದನ್ನು ನೇಮಕ ಮಾಡುವಂತೆ ಸಮ್ಮೇಳನವು ಶಿಫಾರಸು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT