ಸಮಿತಿಯ ಅಧ್ಯಕ್ಷರು ಮತ್ತು ಮಾಜಿ ಉಪ ಮುಖ್ಯಮಂತ್ರಿಗಳೂ ಆದ ಬಿ.ವಿ. ಸುಬ್ಬಾರೆಡ್ಡಿ ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಾ, ಯಾರಾದರೂ ದೆಹಲಿಗೆ ಹೋದಲ್ಲಿ ಅವರು ವೈಯಕ್ತಿಕವಾಗಿ ಹೋದಂತೆಯೇ ಹೊರತು ಕ್ರಿಯಾ ಸಮಿತಿಯ ಪರವಲ್ಲ ಎಂದೂ, ಪ್ರಧಾನಿ ಅವರಿಂದ ಆಹ್ವಾನ ಬಂದರೆ ಮಾತ್ರವೇ ಮಾತುಕತೆಗಾಗಿ ತಾವು ದೆಹಲಿಗೆ ಹೋಗುವುದಾಗಿಯೂ ತಿಳಿಸಿದರು.