ಕಾವೇರಿ ವಿವಾದ: ಪಕ್ಷಬೇದ ಮರೆತು ಒಗ್ಗೂಡಲು ರಾಜ್ಯದ ಜನತೆಗೆ ವೀರೇಂದ್ರರ ಕರೆ
ಮೈಸೂರು, ಅ.31: ‘ಕಾವೇರಿ ಜಲವಿವಾದವು ಪಕ್ಷದ ಪ್ರಶ್ನೆಯಲ್ಲ. ಆದರೆ ಇದು ರಾಜ್ಯದ ಪ್ರಶ್ನೆ’ ಎಂದು ಮೈಸೂರು ರಾಜ್ಯದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಇಂದು ಹೇಳಿದರು.
ಇಲ್ಲಿಗೆ ಸುಮಾರು 16 ಮೈಲಿ ದೂರ ಇರುವ ಗರ್ಗೇಶ್ವರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಅವರು, ‘ಈ ನದಿ ವಿವಾದದ ಬಗ್ಗೆ ನ್ಯಾಯವಾದ ಹಕ್ಕನ್ನು ಪಡೆಯುವುದಕ್ಕೆ ಎರಡೂವರೆ ಕೋಟಿ ಕನ್ನಡಿಗರಿಗೆ ಇದು ಅಗ್ನಿ ಪರೀಕ್ಷೆಯ ಕಾಲವಾಗಿದೆ’ ಎಂದರು.
ಆಂತರಿಕ ಭಿನ್ನಾಭಿಪ್ರಾಯಗಳೇನೇ ಇರಲಿ ಅಥವಾ ಯಾವ ಪಕ್ಷಕ್ಕೆ ಸೇರಿದವರರಾಗಿರಲಿ ಈ ಸಮಸ್ಯೆ ವಿಷಯದಲ್ಲಿ ಸಮಗ್ರ ಕನ್ನಡಿಗರೆಲ್ಲಾ ಒಂದೇ ಎಂಬುದು ತಮ್ಮ ಭಾವನೆಯಾಗಿದೆ ಎಂದೂ ಅವರು ನುಡಿದರು.