ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, 8–12–1970

Last Updated 7 ಡಿಸೆಂಬರ್ 2020, 18:39 IST
ಅಕ್ಷರ ಗಾತ್ರ

ಕಾವೇರಿ ವಿವಾದದ ಬಗ್ಗೆ ರಾಜ್ಯ ಸಲಹೆ: ಇಂದಿರಾ ಅಸಮ್ಮತಿ

ಬೆಂಗಳೂರು, ಡಿ. 7– ಕಾವೇರಿ ನೀರು ವಿವಾದವನ್ನು ಹಾಗೂ ಯೋಜನೆಗಳಿಗೆ ಮಂಜೂರಾತಿ ಕೇಳುತ್ತಿರುವ ಮೈಸೂರುವಾದದ ನ್ಯಾಯವನ್ನು ಪ್ರಧಾನಿ ತಿಳಿದುಕೊಳ್ಳಲು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂಬ ಶ್ರೀ ವೀರೇಂದ್ರ ಪಾಟೀಲರ ಸಲಹೆಯನ್ನು ಪ್ರಧಾನಿ ಒಪ್ಪಲಿಲ್ಲ.

‘ಇಂಥ ಸಭೆಯನ್ನು ಕರೆದರೆ ನಾನು ಹಾಜರಾಗುತ್ತೇನೆ ಎಂದು ಹೇಳಿದೆ. ಆದರೆ, ಪ್ರಧಾನಿ ಪ್ರತಿಕ್ರಿಯೆ ನನ್ನ ಸಲಹೆಗೆ ಅನುಕೂಲವಾದುದಾಗಿರಲಿಲ್ಲ’ ಎಂದು ಇಂದು ದೆಹಲಿಯಿಂದ ಹಿಂದಿರುಗಿದ ಮುಖ್ಯಮಂತ್ರಿಯವರು ವರದಿಗಾರರಿಗೆ ತಿಳಿಸಿದರು.

ಗಡಿ: ಈ ತಿಂಗಳೇ ಕೇಂದ್ರದ ನಿರ್ಧಾರ?

ಬೆಂಗಳೂರು, ಡಿ. 7– ಸಂಸತ್ತಿನ ಪ್ರಸಕ್ತ ಅಧಿವೇಶನ ಅಂತ್ಯವಾಗುವುದರೊಳಗೆ ಕೇಂದ್ರ ಸರ್ಕಾರ ಗಡಿ ವಿವಾದದ ಬಗ್ಗೆ ತೀರ್ಮಾನ ಕೈಗೊಳ್ಳಬಹುದೆಂಬ
ನಿರೀಕ್ಷೆಯ ಕಾರಣ, ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ತಮ್ಮ ಆಸ್ಟ್ರೇಲಿಯಾ ಪ್ರವಾಸವನ್ನು ಮುಂದಕ್ಕೆ ಹಾಕಿದ್ದಾರೆ.

ಸಂಸತ್ತಿನ ಪ್ರಸ್ತುತ ಅಧಿವೇಶನ ಮುಕ್ತಾಯವಾಗುವುದರೊಳಗೆ, ಕೇಂದ್ರ ಸರ್ಕಾರ ಗಡಿ ವಿವಾದದ ಬಗ್ಗೆ ಏನಾದರೂ ಒಂದು ನಿರ್ಧಾರ ಕೈಗೊಂಡು ಪ್ರಕಟಿಸುವುದಾಗಿ ಇಲ್ಲಿನ ರಾಜಕೀಯ ವಲಯಗಳಲ್ಲಿ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT