ರಾಜ್ಯದ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ 36.60 ಕೋಟಿ ರೂ. ನೆರವು ಸಿಗುವ ನಿರೀಕ್ಷೆ ಇದೆ. ಮೈಸೂರು ರಾಜ್ಯದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಆರ್. ಗುಡ್ಗೀಳ್ಅ ವರು ರಾಜ್ಯದ ವಾರ್ಷಿಕ ಯೋಜನೆಯ ಕುರಿತು ಇಂದು ಚರ್ಚಿಸಿದರು. ಚರ್ಚೆ ಕಾಲದಲ್ಲಿ ಮೈಸೂರಿನ ಅರ್ಥ ಸಚಿವ ರಾಮಕೃಷ್ಣ ಹೆಗ್ಗಡೆಯವರೂ ಹಾಜರಿದ್ದರು.