ನವದೆಹಲಿ, ಏ. 1– ಬಾಂಗ್ಲಾ ಸ್ವಾತಂತ್ರ್ಯಾಕಾಂಕ್ಷಿಗಳಿಂದ ಬಿಗಿ ಹೋರಾಟ ಎದುರಿಸುತ್ತಿರುವ ಪಾಕಿಸ್ತಾನಿ ಆಡಳಿತವು ಈಗ ಆಪಾದನೆಗಳನ್ನೆಲ್ಲ ಭಾರತದ ಮೇಲೆ ಹೊರಿಸಲು ಆರಂಭಿಸಿದೆ.
ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾನುಭೂತಿ ಮತ್ತು ಬೆಂಬಲ ವ್ಯಕ್ತಪಡಿಸಿರುವ ಭಾರತ ಪಾರ್ಲಿಮೆಂಟ್ನ ಅವಿರೋಧ ನಿರ್ಣಯವು ‘ಪಾಕ್ ವ್ಯವಹಾರದಲ್ಲಿ ಹಸ್ತಕ್ಷೇಪ’ ಮಾಡಿದೆಯೆಂದು ಪಾಕ್ ರೇಡಿಯೊ ಬಿತ್ತರಿಸಿದೆ.
ಮುಜೀಬುರ್ ಬಂಧನ ವರದಿ ಶುದ್ಧ ಸುಳ್ಳು: ನಿಕಟವರ್ತಿ ಸ್ಪಷ್ಟನೆ
ಕಲ್ಕತ್ತ, ಏ. 1– ಸ್ವತಂತ್ರ ಬಾಂಗ್ಲಾದೇಶ ಚಳವಳಿ ನಾಯಕ ಷೇಖ್ ಮುಜೀಬುರ್ ರಹಮಾನ್ ಅವರನ್ನು ಬಂಧಿಸಿ ಲಾಹೋರಿಗೆ ಒಯ್ಯಲಾಗಿದೆಯೆಂಬ ಲಂಡನ್ ವರದಿಗಳನ್ನು ‘ಆಧಾರರಹಿತ’ವೆಂದು ರಹಮಾನ್ರವರ ನಿಕಟವರ್ತಿ ಅಮಿ ಅಹ್ಮದ್ ಅಬ್ಜಲುರ್ ರಷೀದ್ ಕರೆದಿದ್ದಾರೆ.