ರಾಜ್ಯ ಆಡಳಿತ ಕಾಂಗ್ರೆಸ್ನಲ್ಲಿ ಇನ್ನು ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡುವುದಿಲ್ಲ
ಬೆಂಗಳೂರು: ಜು 22 ಇನ್ನು ಮುಂದೆ ರಾಜ್ಯದ ಆಡಳಿತ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ಕೊಡುವುದಿಲ್ಲವೆಂದು ಆಡಳಿತ ಕಾಂಗ್ರೆಸ್ನ ನಾಯಕರಲ್ಲಿ ಒಬ್ಬರಾದ ಎಚ್. ಸಿದವೀರಪ್ಪ ಅವರು ಇಂದು ಇಲ್ಲಿ ಭರವಸೆ ನೀಡಿದರು. ಇದ್ದ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಮರೆತಿದ್ದೇವೆ. ಮುಂದೆ ಯಾವ ಭಿನ್ನಾಭಿಪ್ರಾಯಗಳಿಗೂ ಅವಕಾಶ ಕೊಡುವುದಿಲ್ಲ. ಈ ಮಾತನ್ನು ನಾವಿಬ್ಬರೂ (ದೇವರಾಜ ಅರಸ್ ಮತ್ತೊಬ್ಬರು) ಹೈಕಮಾಂಡ್ಗೆ ತಿಳಿಸಿದ್ದೇವೆ‘ ಎಂದು ತಿಳಿಸಿದರು.
ಪ್ರದೇಶ ಕಾಂಗ್ರೆಸ್ ಸಮಿತಿ, ಕಾರ್ಯಕಾರಿ ಸಮಿತಿ ಹಾಗೂ ಚುನಾವಣೆ ಸಮಿತಿಗಳ ನೇಮಕ ಸಂಬಂಧದಲ್ಲಿ ಹೈಕಮಾಂಡಿನ ಸದಸ್ಯರೊಡನೆ ಮಾತುಕತೆ ನಡೆಸಲು ದೆಹಲಿಗೆ ತೆರಳಿದ್ದ ಶ್ರೀಯುತರು ಇಂದು ನಗರಕ್ಕೆ ಹಿಂದಿರುಗಿದರು. ಪ್ರದೇಶ ಸಮಿತಿ ಅಧ್ಯಕ್ಷ ದೇವರಾಜ ಅರಸು ಅವರು ಶನಿವಾರ ನಗರಕ್ಕೆ ಹಿಂದಿರುಗುವರು.