ವಿಮಾನದಲ್ಲಿಳಿದು ಢಾಕಾದತ್ತ ನಮ್ಮ ಪಡೆಗಳ ದೌಡು: ಪ್ರಬಲ ಮುತ್ತಿಗೆ
ನವದೆಹಲಿ, ಡಿ. 12– ಅಕ್ರಮಣಕೋರ ಪಾಕಿಸ್ತಾನಿ ಸೈನ್ಯದ ರಕ್ಷಣಾ ವ್ಯೂಹವನ್ನು ಬಗ್ಗುಬಡಿಯುವ ನಿರ್ದಿಷ್ಟ ಉದ್ದೇಶದಿಂದ ಭಾರತ ಸೈನ್ಯದ ಪ್ಯಾರಾಷೂಟ್ ದಳಗಳವರು ಮುಕ್ತವಾಹಿನಿ ಪಡೆಯೊಡನೆ ಒಂದಾಗಿ ಢಾಕಾ ಸುತ್ತ ಲಗ್ಗೆ ಹಾಕಿ ಮುನ್ನುಗ್ಗುತ್ತಿದ್ದಾರೆ.
ಭಾರತದ ಸೈನ್ಯ ಇಂದು ರಾತ್ರಿ 10 ಗಂಟೆ ಸಮಯದಲ್ಲಿ ಬಾಂಗ್ಲಾದ ರಾಜಧಾನಿ ಢಾಕಾದಿಂದ ಕೇವಲ 22 ಮೈಲಿ ದೂರದಲ್ಲಿದೆ ಎಂದು ವರದಿಯಾಗಿದ್ದು, ‘ಢಾಕಾ ವಿಮೋಚನಾ ಸಮರ’ ಪೂರ್ಣವಾಗಿಯೇ ಬಿರುಸುಗೊಂಡಂತಾಗಿದೆ.
ಸಾವಿರ ಶತ್ರು ಸೈನಿಕರ ಶರಣಾಗತಿ
ಕೋಲ್ಕತ್ತ, ಡಿ. 12– ಸುಮಾರು ಒಂದು ಸಹಸ್ರ ಪಾಕಿಸ್ತಾನಿ ಸೈನಿಕರು ಇಂದು ಕೊಮಿಲ್ಲ ವಿಭಾಗದಲ್ಲಿ ಭಾರತ ಸೇನೆಗೆ ಶರಣಾಗತರಾದ ರೆಂದು ಅಧಿಕೃತವಾಗಿ ಪೂರ್ವ ಸೇನಾ ಕಚೇರಿ ವಕ್ತಾರರು ಸುದ್ದಿಗಾರರರಿಗೆ ತಿಳಿಸಿದರು.
ಭಾರತದ ದಂಡನಾಯಕ ಜನರಲ್ ಮಾಣೆಕ್ ಷಾ ಅವರ ಕರೆಗೆ ಪ್ರತಿಕ್ರಿಯೆಯಾಗಿ ಶರಣಾಗತರಾದರು ಎಂದೂ ಅವರು ತಿಳಿಸಿದರು.